‘ಚರ್ನೋಬಿಲ್ ದುರಂತ’ ಕೃತಿಯು ಮೂಲತಃ ಸ್ವೆಟ್ಲಾನಾ ಅಲೆಕ್ಸಿವಿಚ್ ಅವರ ‘ವಾಯ್ಸ್ ಸ್ ಫ್ರಮ್ ಚರ್ನೋಬಿಲ್’ ದ ಓರಲ್ ಹಿಸ್ಟರಿ ಆಫ್ ಎ ನ್ಯೂಕ್ಲಿಯರ್ ಡಿಸಾಸ್ಟರ್ ಕಾದಂಬರಿಯನ್ನು ಸುಮಂಗಲಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು 2015 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿರುತ್ತದೆ. ಕೃತಿಗೆ ಬೆನ್ನುಡಿ ಬರೆದಿರುವ ನಾಗೇಶ ಹೆಗಡೆ ಅವರು, ನಮ್ಮ ಭೋಪಾಲ ದುರಂತವನ್ನು ಮೀರಿಸಿದ್ದು ರಷ್ಯದ ಚರ್ನೋಬಿಲ್ ದುರಂತ. ಅಲ್ಲಿ 1986 ರಲ್ಲಿ ಸ್ಪೋಟಗೊಂಡ ಪರಮಾಣು ರಿಯಾಕ್ಷನಿನ ಸುತ್ತಲೂ ಇಂದಿಗೂ ದುರಂತ ನಿರಂತರವಾಗಿದೆ. ವಿಕೃತ ಮಕ್ಕಳು ಜನಿಸುತ್ತಲೇ ಇದ್ದಾರೆ. ಅದು ಎಂಥಾ ವಿಕೃತಿ ಎಂದರೆ ‘ನಾವೇನಾದ್ರೂ ಈ ಮಗೂನಾ ಟೀವಿಲಿ ತೋರಿಸಿದ್ರೆ, ಒಬ್ಬ ತಾಯಿಯೂ ಮಕ್ಕಳನ್ನು ಹೆರೋದಿಲ್ಲ’ ಎನ್ನುವಷ್ಟು. ಅಲ್ಲಿನ ಸಂಕಷ್ಟ ಸರಮಾಲೆಗಳ ಎದೆ ಬಿರಿಯುವ ದೃಶ್ಯಗಳನ್ನು ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತೆ ಸ್ವೆಟ್ಲಾನಾ ಅಲೆಕ್ಷಿವಿಚ್ ಇಲ್ಲಿ ನಿರೂಪಿಸಿದ್ದಾರೆ. ಸಾಹಿತ್ಯಲೋಕಕ್ಕೆ ವಿಶಿಷ್ಟವೆನಿಸಿದ ಕಥನ ಶೈಲಿ ಅವರದು. ಇಲ್ಲಿ ನೈಜ್ಯ ಪಾತ್ರಗಳ ಮಾತಿನಲ್ಲೇ ಪರಮಾಣು ಮಾದರಿಯ ಕರಾಳ ಚಿತ್ರಣ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಮೂಲ ರಷ್ಯನ್ ಭಾಷೆಯಿಂದ ಇಂಗ್ಲಿಷ್ ಗೆ ತರ್ಜುಮೆಯಾಗಿದ್ದನ್ನು ಅಷ್ಟೇ ಸತ್ವಪೂರ್ಣವಾಗಿ ಕತೆಗಾರ್ತಿ ಸುಮಂಗಲಾ ಅವರು ಕನ್ನಡಕ್ಕೆ ಪಡಿ ಮೂಡಿಸಿದ್ದಾರೆ ಎಂದಿದ್ದಾರೆ.
ಲೇಖಕಿ, ಕತೆಗಾರ್ತಿ ಮತ್ತು ಅನುವಾದಕಿ ಸುಮಂಗಲಾ ಶಿವಮೊಗ್ಗದ ಸಾಗರದವರು. "ಚರ್ನೋಬಿಲ್ ಪ್ರಾರ್ಥನೆ" ಅವರ ಇತ್ತೀಚಿನ ಅನುವಾದ ಕೃತಿ. “ಹನ್ನೊಂದನೇ ಅಡ್ಡರಸ್ತೆ” ಇವರಿಗೆ ಹೆಸರು ತಂದುಕೊಟ್ಟ ಕಥಾ ಸಂಕಲನ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಡಲು ಬಾಲ್ಯದಲ್ಲಿ ಕಂಡ ಅಪ್ಪನ ಪುಸ್ತಕ-ಪ್ರೀತಿಯೇ ಕಾರಣ ಎನ್ನುತ್ತಾರೆ. ಅವರ ಮೊದಲಕತೆ ಸೀತಾಳೆ ಹೂ ಕನ್ನಡ ಕಥಾಲೋಕ ಎದ್ದುನಿಂತು ಗಮನಿಸುವಷ್ಟು ಪರಿಣಾಮಕಾರಿಯಾಗಿದೆ. ಕನ್ನಡದ ಹಲವಾರು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಗೊಂಡ ಹಲವು ಕತೆಗಳು ಸೀತಾಳೆ ಹೂ ಮತ್ತು ಇತರ ಕಥೆಗಳು ಎಂಬ ಇವರ ಮೊದಲ ಕಥಾಸಂಕಲನದಲ್ಲಿ ಕಾಣಿಸಿಕೊಂಡವು. ತದನಂತರ 2005ರಲ್ಲಿ ಜುಮುರು ...
READ MORE